Chethan Chandra: ನಿನ್ನೆ ಅಮ್ಮಂದಿರ ದಿನ. ಭಾನುವಾರವೇ ಬಂದಿದ್ದರಿಂದ ಎಲ್ಲರೂ ತಮ್ಮ ದೇವತೆಯನ್ನು ದೇವಸ್ಥಾನಕ್ಕೋ, ಆಚೆ ಊಟಕ್ಕೋ ಕರೆದುಕೊಂಡು ಹೋಗಿ ಅಮ್ಮನ ಜೊತೆ ಸಮಯ ಕಳೆದಿದ್ದಾರೆ. ಅದೇ ರೀತಿ ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಕೂಡ ತಮ್ಮ ತಾಯಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ವಾಪಸ್ಸಾಗುವಾಗ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದಾರೆ.
ರಾಜಧಾನಿ, ಪ್ರೇಮಿಸಂ, ಪ್ಲಸ್, ಜಾತ್ರೆ, ಹುಚ್ಚು ಹುಡುಗ್ರು ಸೇರಿದಂತೆ ಹಲವು ಸಿನಿಮಾಗಳಲ್ಲಿ ಚೇತನ್ ಚಂದ್ರ(Chethan Chandra) ನಟಿಸಿದ್ದಾರೆ. ಅಮ್ಮಂದಿರ ದಿನದಂದು ತಾಯಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ವಾಪಸ್ಸಾಗುವ ವೇಳೆ ಕನಕಪುರ ರೋಡ್ನ ಕಗ್ಗಲಿಪುರ ಬಳಿ 20 ಜನರ ಗುಂಪು ಚೇತನ್ ಚಂದ್ರ ಮೇಲೆ ಹಲ್ಲೆ ಮಾಡಿದೆ. ಚೇತನ್ ಮೂಗಿನ ಮೂಳೆ ಮುರಿದಿದ್ದು, ಕಾಲಿಗೆ, ಮೈ ಕೈಗೆ ಏಟಾಗಿದೆ. ಕಾರನ್ನೂ ಕೂಡ ಜಖಂ ಮಾಡಲಾಗಿದೆ. ರಕ್ತ ಸುರಿಯುತ್ತಿದ್ರು, ಇನ್ಸ್ಟಾ ಗ್ರಾಂ ಲೈವ್ ಬಂದು ತಮ್ಮ ಮೇಲೆ ಕೃತ್ಯ ನಡೆಸಿದವರ ಬಗ್ಗೆ, ಅಚಾನಕ್ ಆದ ಘಟನೆ ಬಗ್ಗೆ ವಿವರಿಸಿದ್ದಾರೆ, ನ್ಯಾಯ ಬೇಕೆಂದು ಒತ್ತಾಯಿಸಿದ್ದಾರೆ. ಬ್ಯಾಡ್ ಎಕ್ಸ್ಪೀರಿಯನ್ಸ್, ನೀಡ್ ಜಸ್ಟೀಸ್ ಎಂದು ವಿಡಿಯೋ ಹಂಚಿಕೊಂಡಿದ್ದು, ಸೇಹಿತರು, ಆಪ್ತರು ಆತಂಕ ಹೊರ ಹಾಕಿದ್ದಾರೆ.
ಕಾರಿಗೆ ಹಿಂದೆಯಿಂದ ಗುದ್ದಿ ನಂತರ ನನ್ನದೇ ತಪ್ಪು ಎನ್ನುವಂತೆ ವಾದ ವಿವಾದ ನಡೆಸಿ ಹಲ್ಲೆ ನಡೆಸಿದ್ದಾರೆ. ಘಟನೆ ಬಳಿಕ ಕಗ್ಗಲಿಪುರ ಬಳಿಯ ಆಸ್ಪತ್ರೆಯಲ್ಲಿ ಪ್ರಥಮ ಚಿಕತ್ಸೆ ಪಡೆದು ಕಗ್ಗಲಿಪುರ ಪೊಲೀಸ್ ಸ್ಟೇಷನ್ನಲ್ಲಿ ಕಂಪ್ಲೆಂಟ್ ನೀಡಲಾಗಿದೆ. ನ್ಯಾಯಬೇಕೆಂದು ಚೇತನ್(Chethan Chandra) ಚಂದ್ರ ಒತ್ತಾಯಿಸಿದ್ದಾರೆ. ಸೀರಿಯಲ್ಗಳಲ್ಲೂ ಮಿಂಚಿರುವ ಈ ನಟ ಸದ್ಯ ಸಿನಿಮಾ, ಸೀರಿಯಲ್ಗಳಿಂದಲೂ ದೂರ ಉಳಿದಿದ್ದಾರೆ.