Allu Arjun: ಟಾಲಿವುಡ್ ಚಿತ್ರರಂಗದ ಹೆಸರಾಂತ ಸ್ಟಾರ್ ಕುಟಂಬ ಕೊನಿಡೆಲಾ ಫ್ಯಾಮಿಲಿ. ಮೆಗಾಸ್ಟಾರ್ ಚಿರಂಜೀವಿ, ಪವರ್ ಸ್ಟಾರ ಪವನ್ ಕಲ್ಯಾಣ್, ರಾಮ್ ಚರಣ್ ಈ ಮನೆತನದ ಹೆಸರಾಂತ ವ್ಯಕ್ತಿಗಳು. ನಟ ಅಲ್ಲು ಅರ್ಜುನ್ಗೂ ಆಪ್ತ ಈ ಕುಟುಂಬ. ಆದ್ರೆ ಕಳೆದ ಒಂದಷ್ಟು ವರ್ಷಗಳ ಹಿಂದೆ ಪವನ್ ಕಲ್ಯಾಣ್ ಹಾಗೂ ಅಲ್ಲು ಅರ್ಜುನ್ ಮಾತನಾಡುತ್ತಿರಲಿಲ್ಲ. ಆದ್ರೀಗ ಇಬ್ಬರೂ ಒಂದಾಗಿದ್ದಾರೆ.
ಪವನ್ ಕಲ್ಯಾಣ್(Pawan Kalyan), ಚಿರಂಜೀವಿ(Chiranjeevi) ಮಧ್ಯೆ ರಾಜಕೀಯ ವಿಚಾರವಾಗಿ ಒಂದಿಷ್ಟು ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಇದ್ರಂದಾಗಿ ಅಣ್ಣ-ತಮ್ಮ ಉತ್ತರ, ದಕ್ಷಿಣದಂತಿದ್ದರು. ಅಲ್ಲು ಅರ್ಜುನ್ ಕೂಡ ಚಿರಂಜೀವಿ ಪರ ಬ್ಯಾಟ್ ಬೀಸಿದ್ರು. ಸಮಾರಂಭವೊಂದರಲ್ಲಿ ಅಲ್ಲು ಅರ್ಜುನ್ಗೆ ಪವನ್ ಕಲ್ಯಾಣ್ ಫ್ಯಾನ್ಸ್ ಕ್ವಾಟ್ಲೆ ನೀಡಿದ್ರು. ಪವನ್ ಕಲ್ಯಾಣ್ ಬಗ್ಗೆ ಮಾತನಾಡುವಂತೆ ಒತ್ತಾಯಿಸಿದ್ರು ಆಗ ಅಲ್ಲು ಅರ್ಜುನ್ ಮುಖದ ಮೇಲೆ ಹೊಡೆದಂತೆ ನಾನು ಅವರ ಬಗ್ಗೆ ಮಾತನಡೋದಿಲ್ಲ ಎಂದಿದ್ರು. ಇದು ಪವರ್ ಸ್ಟಾರ್ ಅಭಿಮಾನಿಗಳನ್ನು ಇನ್ನಷ್ಟು ಕೆಣಕ್ಕಿತ್ತು. ಆದಾದ ಮೇಲೆ ಇಬ್ಬರ ನಡುವಿನ ಮುನಿಸು ಹಾಗೆ ಮುಂದುವರೆದಿತ್ತು. ಆದ್ರೀಗ ಚಿರಂಜೀವಿ ಹಾಗೂ ಪವನ್ ಕಲ್ಯಾಣ್ ಒಂದಾಗಿದ್ದಾರೆ. ಹಾಗೆಯೇ ಅಲ್ಲು ಅರ್ಜುನ್(Allu Arjun) ಕೂಡ ಮುನಿಸು ಮರೆತಿದ್ದಾರೆ. ಇದಕ್ಕೆ ಸಾಕ್ಷಿ ಅಲ್ಲು ಅರ್ಜುನ್ ಪೋಸ್ಟ್.
ಪವನ್ ಕಲ್ಯಾಣ್(Pawan Kalyan) ರಾಜಕೀಯ ಜೀವನ ಕಟ್ಟಿಕೊಳ್ಳಲು ಹಗಲು ಇರುಳು ಶ್ರಮಿಸುತ್ತಿದ್ದಾರೆ. ಈ ಬಾರಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದಾರೆ. ಜನಸೇನಾ ಪಕ್ಷದಿಂದ ಚುನಾವಣೆಗೆ ನಿಂತಿದ್ದಾರೆ. ಈಗಾಗಲೇ ಚಿರಂಜೀವಿ ತಮ್ಮನ ಪರ ಬ್ಯಾಟ್ ಬೀಸಿದ್ದು, ತಮ್ಮನನ್ನು ಬೆಂಬಲಿಸುವಂತೆ ವಿನಂತಿ ಮಾಡಿಕೊಂಡಿದ್ದಾರೆ. ಅದೇ ಬೆನ್ನಲ್ಲೇ ಅಲ್ಲು ಅರ್ಜುನ್(Allu Arjun) ಕೂಡ ಪವನ್ ಕಲ್ಯಾಣ್ಗೆ ಶುಭ ಹಾರೈಸಿದ್ದಾರೆ. ‘ನಿಮ್ಮ ಚುನಾವಣಾ ಪಯಣ ಯಶಸ್ವಿಯಾಗಿರಲಿ ಎಂದು ಆಶಿಸುತ್ತೇನೆ. ನೀವು ಆರಿಸಿಕೊಂಡ ಮಾರ್ಗದ ಬಗ್ಗೆ ನಾನು ಯಾವಾಗಲೂ ಹೆಮ್ಮೆ ಪಡುತ್ತೇನೆ. ಕುಟುಂಬದ ಸದಸ್ಯನಾಗಿ ನನ್ನ ಪ್ರೀತಿ ಬೆಂಬಲ ಸದಾ ನಿಮ್ಮೊಂದಿಗೆ ಇರುತ್ತದೆ’ ಎಂದು ಶುಭ ಕೋರಿದ್ದಾರೆ ನಟ ಅಲ್ಲು ಅರ್ಜುನ್. ಈ ಪೋಸ್ಟ್ ಕೊನೆಡೆಲಾ ಫ್ಯಾಮಿಲಿಯಲ್ಲಿ ಎಲ್ಲವೂ ಸರಿಯಿದೆ. ಭಿನ್ನಾಭಿಪ್ರಾಯಗಳು ಶಮನವಾಗಿದೆ ಎನ್ನುವುದನ್ನು ಸಾರುತ್ತಿದ್ದು, ಈ ಬೆಳವಣಿಗೆ ಇಬ್ಬರ ಫ್ಯಾನ್ಸ್ಗೂ ಸಮಾಧಾನ ನೀಡಿದೆ.