ತೆಲುಗು ಹೀರೋ ವಿಜಯ್ ದೇವರಕೊಂಡ ಹಾಗೂ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ನಡುವಿರೋದು ಸ್ನೇಹಾನಾ ಅಥವಾ ಪ್ರೀತಿನಾ ಅನ್ನೋದಕ್ಕೆ ಕ್ಲ್ಯಾರಿಟಿ ಸಿಕ್ಕಿಲ್ಲ. ಹೀಗಿರುವಾಗಲೇ, ಅವರಿಬ್ಬರು ಮದುವೆಯಾದರೆ ಡಿವೋರ್ಸ್ ಪಡೆಯೋದು ಗ್ಯಾರಂಟಿ ಅನ್ನೋ ಮಾತು ಕೇಳಿಬಂದಿದೆ. ಅಷ್ಟಕ್ಕೂ, ಹೀಗಂತ ಹೇಳ್ತಿರೋದು ಬೇರಾರು ಅಲ್ಲ ಸ್ಟಾರ್ ಜ್ಯೋತಿಷಿ ಅಂತನೇ ಹೆಸರುವಾಸಿಯಾಗಿರುವ ವೇಣು ಸ್ವಾಮಿ
ವೇಣು ಸ್ವಾಮಿ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಸೆಲೆಬ್ರಿಟಿ ಜ್ಯೋತಿಷಿ ಎಂತಲೇ ಫೇಮಸ್. ಇಲ್ಲಿತನಕ ಯಾವೆಲ್ಲಾ ಸೆಲೆಬ್ರಿಟಿಗಳ ಬಗ್ಗೆ ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೋ ಅದೆಲ್ಲವೂ ನಿಜವಾಗಿದೆ. ಅವರ ನುಡಿದಂತೆಯೇ ಹಲವು ತಾರೆಯರ ಬದುಕು ಸಾಗುತ್ತಿದೆ. ಹೌದು, ಸಮಂತಾ-ನಾಗಚೈತನ್ಯ ಪ್ರೀತಿಸಿ ಮದುವೆಯಾದ್ರೂ ಕೂಡ ವಿಚ್ಛೇದನ ಪಡೀತಾರೆ ಅಂತ ಭವಿಷ್ಯ ನುಡಿದಿದ್ದರು. ಬಾಹುಬಲಿ ಆದ್ಮೇಲೆ ಪ್ರಭಾಸ್ ಸೋಲಿನ ಸುಳಿಗೆ ಸಿಲುಕಿ ಒದ್ದಾಡ್ತಾರೆ ಎಂದಿದ್ದರು. ನರೇಶ್ ಹಾಗೂ ಪವಿತ್ರ ಲೋಕೇಶ್ ಮದುವೆ ಬಗ್ಗೆಯೂ ಮೊದಲೇ ತಿಳಿಸಿದ್ದರು. ಈಗ, ವಿಜಯ್ ಹಾಗೂ ರಶ್ಮಿಕಾ ಮದುವೆಯಾದರೆ ಡಿವೋರ್ಸ್ ಗ್ಯಾರಂಟಿ ಅಂತ ಹೇಳಿಕೆ ಕೊಟ್ಟಿದ್ದಾರೆ.
ಖಾಸಗಿ ಚಾನೆಲ್ ಒಂದರ ಸಂದರ್ಶನದಲ್ಲಿ ಮಾತನಾಡಿದ ವೇಣು ಸ್ವಾಮಿ, ರಶ್ಮಿಕಾ ಹಾಗೂ ವಿಜಯ್ ದೇವರೊಂಡ ಪರಸ್ಪರ ಪ್ರೀತಿಯಲ್ಲಿರುವುದು ಗುಟ್ಟೇನೂ ಅಲ್ಲ. ಅವರಿಬ್ಬರು ವಿವಾಹ ಆಗಲಿದ್ದಾರೆ. ಆದರೆ ವಿವಾಹವಾದ ಬಳಿಕ ಇಬ್ಬರೂ ದೂರಾಗಲಿದ್ದಾರೆ. ಇದು ಖಚಿತ. ವಿಜಯ್ ದೇವರಕೊಂಡ ಜೊತೆ ಮದುವೆಯಾದರೆ ವಿಚ್ಛೇದನ ಆಗಲಿದೆ ಎಂದು ನಾನು ನೇರವಾಗಿ ರಶ್ಮಿಕಾ ಮಂದಣ್ಣ ಅವರಿಗೆ ಹೇಳಿದ್ದೇನೆ. ಇದೇ ಕಾರಣಕ್ಕೆ ಅವರು ನನ್ನೊಂದಿಗೆ ಮಾತನಾಡುವುದು ಬಿಟ್ಟು, ನನ್ನ ಸಂಪರ್ಕ ಕಡಿದುಕೊಂಡಿದ್ದಾರೆ. ಅಷ್ಟಕ್ಕೂ, ರಶ್ಮಿಕಾ ಮಂದಣ್ಣ ಸಮಾಜಕ್ಕೆ ನಾಯಕಿ ಆಗಿರಬಹುದು ಆದರೆ ನನಗೆ ಕೇವಲ ಕ್ಲೈಂಟ್ ಅಷ್ಟೆ. ಅವರ ಜನಪ್ರಿಯತೆ ನೋಡಿ ನಾನು ಭವಿಷ್ಯ ಹೇಳುವುದಿಲ್ಲ, ಅವರ ಗ್ರಹಗತಿ ನೋಡಿ ಭವಿಷ್ಯ ಹೇಳುತ್ತೇನೆ. ನಾನು ಹೇಳಿದ ನಿಜ ಅವರಿಗೆ ಹಿಡಿಸಲಿಲ್ಲ, ಇರಲಿ ಪರವಾಗಿಲ್ಲ, ಆದರೆ ಅವರಿಬ್ಬರು ಮದುವೆಯಾಗಿ ದೂರಾಗುವುದು ಖಚಿತ ಎಂದು ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ನಡುವೆ ಪರ-ವಿರೋಧದ ಚರ್ಚೆ ಜೋರಾಗಿ ನಡೆಯುತ್ತಿದೆ.
ಅಷ್ಟಕ್ಕೂ, ಡಿಯರ್ ಕಾಮ್ರೇಡ್ ಕಪಲ್ಸ್ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ವಿಚಾರ ಇತ್ತೀಚಿನ ದಿನಗಳಲ್ಲಿ ತುಸು ಜೋರಾಗಿಯೇ ಕೇಳಿ ಬರುತ್ತಿದ್ದು, ಈ ಇಬ್ಬರು ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದಾರೆ ಎಂಬ ಮಾತು ಸಹ ಆಗಿಂದಾಗೆ ಕೇಳಿ ಬರುತ್ತಿರುತ್ತವೆ. ಆದರೆ, ಈ ಇಬ್ಬರು ನಾವಿಬ್ಬರು ಬರಿ ಫ್ರೆಂಡ್ಸ್ ಅಷ್ಟೇ ಎಂದು ಹೇಳುವ ಮೂಲಕ ತಮ್ಮ ಬಗೆಗಿನ ಸುದ್ದಿಗಳನ್ನು ಅಲ್ಲಗಳೆಯುತ್ತಿದ್ದಾರೆ. ಅಚ್ಚರಿ ಅಂದರೆ ರಶ್ಮಿಕಾ ಮಂದಣ್ಣ ತಮ್ಮ ವೃತ್ತಿ ಬದುಕಿನ ಆರಂಭದಲ್ಲಿ ವೇಣು ಸ್ವಾಮಿ ಅವರಿಂದ ವಿಶೇಷ ಪೂಜೆ ಮಾಡಿಸಿದ್ದರು. ಇವರ ಸಲಹೆ ಮೇರೆಗೆ ವೃತ್ತಿ ಬದುಕಿನತ್ತ ಹೆಚ್ಚು ಗಮನ ಹರಿಸಿ ಯಶಸ್ಸು ಗಳಿಸಿದ್ದರು ಎಂಬ ಸುದ್ದಿ ಕೂಡ ದುನಿಯಾದಲ್ಲಿ ಜೋರಾಗಿ ಕೇಳಿಬಂದಿತ್ತು. ಇದನ್ನ ನೋಡಿ ಕೇಳಿ ಅದೆಷ್ಟೋ ಜನ ನಟಿಮಣಿಯರು ವೇಣುಸ್ವಾಮಿ ಮೊರೆ ಹೋಗಿದ್ದರು.
ಸದ್ಯ, ರಶ್ಮಿಕಾ ಅನಿಮಲ್ ಸಿನಿಮಾ ಮೂಲಕ ದೊಡ್ಡ ಸಕ್ಸಸ್ ಕಂಡು ಬೀಗುತ್ತಿದ್ದಾರೆ. ನ್ಯಾಷನಲ್ ಕ್ರಷ್ ಆಗಿ ಕೇಕೆ ಹೊಡೆಯುತ್ತಿರೋ ಕಿರಿಕ್ ಬ್ಯೂಟಿಗೆ ಅದೃಷ್ಟ ಮತ್ತೆ ಕೈ ಹಿಡಿದಿದೆ. ಬಾಲಿವುಡ್ ಅಂಗಳದಲ್ಲಿ ನೆಲೆ ಕಂಡುಕೊಳ್ಳೋಕೆ ರಣಬೀರ್ ಕಪೂರ್ ಜೊತೆಗಿನ ಅನಿಮಲ್ ಸಿನಿಮಾ ಸಾಥ್ ಕೊಟ್ಟಿದೆ. ಸದ್ಯ ಸಾನ್ವಿ ಪುಷ್ಪ ಪಾರ್ಟ್ 2 ನಲ್ಲಿ ತೊಡಗಿಸಿಕೊಂಡಿದ್ದಾಳೆ. ಇದರ ಜೊತೆಗೆ ರೈನೋ ಹಾಗೂ ದಿ ಗರ್ಲ್ ಫ್ರೆಂಡ್ ಸಿನಿಮಾ ಕೂಡ ಶ್ರೀವಲ್ಲಿ ಕೈಯಲ್ಲಿವೆ. ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಬ್ಯುಸಿಯಾಗಿರೋ ಚಮಕ್ ಚೆಲುವೆ, ವೈಯಕ್ತಿಕ ಜೀವನದ ಕಡೆ ಯಾವಾಗ ಗಮನ ಕೊಡ್ತಾರೋ? ಅದ್ಯಾರನ್ನ ಲೈಫ್ ಪಾರ್ಟನರ್ ಆಗಿ ಬರಮಾಡಿಕೊಳ್ತಾರೋ? ಜಸ್ಟ್ ವೇಯ್ಟ್ ಅಂಡ್ ಸೀ