-ಕುಂಭ ಮೇಳದ ಹಿಂದಿದೆ ರೋಚಕ ಹಿಸ್ಟರಿ!
-ಶವ ಸಂಭೋಗ ಸತ್ಯ; ಶವ ಭೋಜನವೇ ನಿತ್ಯ!

ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರೋ ಕುಂಭ ಮೇಳದತ್ತ ಇದೀಗ ಇಡೀ ಜಗತ್ತಿನ ಚಿತ್ತ ಹೊರಳಿಕೊಂಡಿದೆ. ಇದು ಭಾರತದ ಆಧ್ಯಾತ್ಮಿಕ ಜಗತ್ತಿನ ಮಹಾನ್ ಸೋಜುಗದಂತೆ ಜಗತ್ತಿನ ನಾನಾ ದೇಶಗಳ ಜನರನ್ನು ಸೆಳೆಯಲಾರಂಭಿಸಿದೆ. ಈವತ್ತಿಗೆ ವಿಶ್ವವೆಲ್ಲ ಆಧುನೀಕತೆಗೆ ಒಗ್ಗಿಕೊಂಡಿದೆ. ವಿಜ್ಞಾನ ಅನ್ನೋದು ಒಂದು ಅಸೀಮ ಅರಿವನ್ನು ಜನರಿಗೆ ತಲುಪಿಸುವಲ್ಲಿಯೂ ತಕ್ಕ ಮಟ್ಟಿಗೆ ಯಶ ಕಂಡಿದೆ. ಆದರೆ, ಭಾರತದ ಆಧ್ಯಾತ್ಮಿ ಲೀಕದ ನಿಗೂಢಗಳನ್ನು ಭೇದಿಸುವಲ್ಲಿ ಮಾತ್ರ ವೈಜ್ನಾನಿಕ ಕ್ಷೇತ್ರವೂ ಹಿನ್ನಡೆ ಅನುಭವಿಸಿದಂತಿದೆ. ಯಾಕಂದ್ರೆ, ಅದು ಯಾವ ಪರಿಧಿಗೂ ಸಲೀಸಾಗಿ ನಿಲುಕದ ಅದ್ಭುತ ಜಗತ್ತು. ಇಲ್ಲಿ ತರ್ಕಗಳಿಗೆ ಒಗ್ಗದ ಸಾವಿರ ವಿಚಾರಗಳಿವೆ. ವೈಜ್ಞಾನಿಕ ಮನೋಭಾವವನ್ನೇ ಆವರಿಸಿಕೊಳ್ಳಬಲ್ಲ ಸಮ್ಮೋಹಕ ಅಂಶಗಳಿವೆ. ಯಾವುದು ಮೌಢ್ಯ? ಮತ್ಯಾವುದು ನಂಬಿಕೆ? ಹೀಗೆ ಸಾವಿರ ಪ್ರಶ್ನೆಗಳಿವೆ. ಆದರೆ ಈವತ್ತಿಗೆ ಮಹಾ ಕುಂಭ ಮೇಳ ನಡೆಯುತ್ತಿರೋ ರೀತಿ, ಅಲ್ಲಿ ನೆರೆಯುತ್ತಿರುವ ಕೋಟ್ಯಂತರ ಭಕ್ತಗಣದ ಮುಂದೆ ಮಿಕ್ಕೆಲ್ಲ ಪ್ರಶ್ನೆಗಳೂ ಮಂಡಿಯೂರಿ, ಈ ನೆಲದಲ್ಲಿ ಬೆರೆತು ಹೋಗಿರುವ ನಂಬಿಕೆಗಳು ಮಾತ್ರವೇ ಝೇಂಕರಿಸುತ್ತಿರುವಂತೆ ಭಾಸವಾಗುತ್ತದೆ.
144ವರ್ಷಗಳ ಅಚ್ಚರಿ

ಕುಂಭ ಮೇಳಕ್ಕೊಂದು ಐತಿಹಾಸಿಕ ಹಿನ್ನೆಲೆ ಇದೆ. ಅದರ ಸುತ್ತಾ ನಾನಾ ನಂಬಿಕೆಗಳು ಹಬ್ಬಿಕೊಂಡಿವೆ. ಈ ಬಾರಿ ನಡೆಯುತ್ತಿರೋದು ನೂರಾ ನಲವತ್ನಾಲಕ್ಕು ವರ್ಷಗಳಿಗೊಮ್ಮೆ ನಡೆಯೋ ಮಹಾ ಕುಂಭ ಮೇಳ. ಈವತ್ತಿಗೆ ಈ ಕುಂಭ ಮೇಳದಲ್ಲಿ ಭಾಗಿಯಾದವರು ಮಾತ್ರವಲ್ಲ; ಅದನ್ನು ದೂರದಲ್ಲಿ ನಿಂತು ಬೆರಗಿನಿಂದ ನೋಡುತ್ತಿರೋ ಈವತ್ತುನ ಹೊಸ ತಲೆಮಾರೂ ಕೂಡಾ ಮುಂದಿನ ಕುಂಭ ಮೇಳವನ್ನ ನೋಡಲು ಸಾಧ್ಯವಾಗೋದಿಲ್ಲ. ಈ ಕಾರಣದಿಂದಲೇ ಫೆಬ್ರವರಿ ಇಪ್ಪತ್ತಾರರವರೆಗೆ ನಡೆಯಲಿರೋ ಕುಂಭ ಮೇಳವನ್ನು ಕಣ್ತುಂಬಿಕೊಳ್ಳಲೇ ಬೇಕೆಂಬ ತೀವ್ರ ಆಕಾಂಕ್ಷೆ ಆಸ್ತಿಕ ವಲಯವನ್ನು ಆವರಿಸಿಕೊಂಡಿದೆ. ಅದರ ಹಿಂದೆ ವಿಧಿವತ್ತಾದ ಅನೇಕ ನಡಾವಳಿಗಳು ನಿಖರ ದಿನಾಂಕ, ಮುಹೂರ್ತಗಳಂದು ನಡೆಯುತ್ತಾ ಬಂದಿದೆ.
ಆರು ವರ್ಷಕ್ಕೊಂದು ಸಲ ಕುಂಭ ಮೇಳ ನಡೆದರೆ, ಹನ್ನೆರಡು ವರ್ಷಗಳಿಗೊಂದು ಸಲ ಕುಂಭ ಮೇಳ ನಡೆಯುತ್ತದೆ. ಪ್ರತೀ ಹನ್ನೆರಡು ವರ್ಷಕ್ಕೊಂದು ಬಾರಿ ಪೂರ್ಣ ಕುಂಭ ಮೇಳ ನಡೆಯುತ್ತದೆ. ಹೀಗೆ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಹನ್ನೆರಡು ಪೂರ್ಣ ಕುಂಭ ಮೇಳದ ನಂತರ, ನೂರಾ ನಲವತ್ತನಾಲಕ್ಕು ವರ್ಷಗಳ ಬಳಿಕ ಮಹಾಕುಂಭ ಮೇಳ ನಡೆಯುತ್ತೆ. ಈಗ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರೋದು ಅಂಥಾದ್ದೇ ಒಂದು ಅತ್ಯಂತ ಅಪರೂಪದ, ಶತಮಾನದ ಬಳಿಕ ಒಂದು ತಲೆಮಾರನ್ನು ಮಾತ್ರ ಒಳಗೊಳ್ಳುವಂಥಾ ಮಹಾ ಕುಂಭ ಮೇಳ. ಇಂಥಾದ್ದೊಂದು ಹಿನ್ನೆಲೆ ಇರೋದರಿಂದಲೇ ಪ್ರತೀ ನಿತ್ಯ ಕೋಟಿ ಕೋಟಿ ಮಂದಿ ಮಹಾ ಕುಂಭ ಮೇಳದಲ್ಲಿ ಭಾಗಿಯಾಗಿ ಧನ್ಯರಾಗುತ್ತಿದ್ದಾರೆ.
ಈ ಮಹಾ ಕುಂಭ ಮೇಳದಲ್ಲಿ ಭಾಗಿಯಾಗೋ ಕೋಟ್ಯಾಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಪುನೀತರಾಗುತ್ತಾರೆ. ಈ ಬಾರಿಯಂತೂ ದಾಖಲೆ ಮಟ್ಟದಲ್ಲಿ ಅಲ್ಲಿ ಭಕ್ತ ಗಣ ಜಮಾಯಿಸುತ್ತಿದೆ. ಕೇವಲ ಭಾರತೀಯರು ಮಾತ್ರವಲ್ಲದೇ; ವಿದೇಶಗಳಿಂದಲೂ ಜನ ಆಕರ್ಷಿತರಾಗಿ ಕುಂಭ ಮೇಳದಲ್ಲಿ ಭಾಗಿಯಾಗುತ್ತಿದ್ದಾರೆ. ಅದು ಭಾರತೀಯ ಅಧ್ಯಾತ್ಮ ಪರಂಪರೆಗಿರುವ ನಿಜವಾದ ಶಕ್ತಿ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ. ವಿಶ್ವದ ಎಲ್ಲಾ ದೇಶಗಳಲ್ಲಿಯೂ ಆಯಾ ಭಾಗಕ್ಕನುಗುಣವಾದ ಧಾರ್ಮಿಕ ನಂಬಿಕೆಗಳಿದ್ದಾವೆ. ಆದರೆ ಭಾರತದಲ್ಲಿರುವಂಥ ವೈವಿಧ್ಯಮಯ ಆಚಾರ ವಿಚಾರಗಳು, ನಂಬಿಕೆಗಳು, ಆಚರಣೆಗಳು ಜಗತ್ತಿನ ಬೇರ್ಯಾವ ಭೂಭಾಗಗಳಲ್ಲಿಯೂ ಖಂಡಿತಾ ಕಾಣ ಸಿಗಲು ಸಾಧ್ಯವಲ್ಲ. ಈಗ ನಡೆಯುತ್ತಿರೋ ಮಹಾ ಕುಂಭ ಮೇಳದ ನೆಪದಲ್ಲಿ ಆಧುನಿಕ ಜಗತ್ತಿನ ಮುಂದೆ ಭಾರತದ ಆಧ್ಯಾತ್ಮಿಕ ಶ್ರೀಮಂತಿಕೆ ಅಕ್ಷರಶಃ ಪ್ರಜ್ವಲಿಸುತ್ತಿದೆ.
ಗಮನೀಯ ಅಂಶವೆಂದರೆ, ಒಟ್ಟಾರೆ ಈ ಕುಂಭ ಮೇಳದಲ್ಲಿ ನಾನಾ ಸ್ವರೂಪಗಳ ಆಕರ್ಷಣೆಗಳಿದ್ದರೂ ಕೂಡಾ ಪ್ರಧಾನ ಆಕರ್ಷಣೆಯಾಗಿ ಕಾಣಿಸೋದು ನಾಗಾ ಸಾಧುಗಳ ನಿಗೂಢ ಅಘೋರಿ ಜಗತ್ತು. ಬಹುಶಃ ಕುಂಭ ಮೇಳವೊಂದನ್ನು ಹೊರತು ಪಡಿಸಿದರೆ ಬೇರೆಲ್ಲೂ ಕೂಡಾ ಇಷ್ಟು ದೊಡ್ಡ ಸಂಖ್ಯೆಯ ನಾಗಾ ಸಾಧುಗಳನ್ನು ಕಾಣಲು ಸುತಾರಾಂ ಸಾಧ್ಯವಿಲ್ಲ. ಸಾಮಾನ್ಯವಾಗಿ ನಾಗಾ ಸಾಧುಗಳು, ಅಘೋರಿಗಳು ಭಾರತದ ಬೇರ್ಯಾವ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ಳುವವರಲ್ಲ. ಸದಾ ಕಾಲವೂ ಕಠೋರ ಸಿದ್ಧಿಯಲ್ಲಿ ತೊಡಗಿಸಿಕೊಳ್ಳುವ ಅಘೋರಿಗಳ ಬದುಕೇ ರಣ ರೋಚಕ. ಈವತ್ತಿಗೆ ಮಹಾ ಕುಂಭ ಮೇಳದಲ್ಲಿ ದೊಡ್ಡ ಮಟ್ಟದಲ್ಲಿ ಮಿಂಚುತ್ತಿರುವವರು ಈ ನಾಗಾ ಸಾಧುಗಳೇ. ಇವರ ನಿಗೂಢ ಜಗತ್ತಿನತ್ತ ಹಣಕಿ ಹಾಕುವ ಮುನ್ನ ಕುಂಭ ಮೇಳದ ಪೌರಾಣಿಕ ಹಿನ್ನೆಯತ್ತ ಒಂದಷ್ಟು ಬೆಳಕು ಚೆಲ್ಲುವುದೊಳಿತು…
ಸಮುದ್ರ ಮಥನದ ನಂಟು

ಭಾರತದಲ್ಲಿ ಲೆಕ್ಕವಿಲ್ಲದಷ್ಟು ನಂಬಿಕೆಗಳಿವೆ. ಹಾಗೆ ಹಾಸುಹೊಕ್ಕಾದ ಪ್ರತೀ ನಂಬಿಕೆಗಳಿಗೂ ಕೂಡಾ ಬೆರಗಾಗಿಸುವಂಥಾ ಅಧ್ಯಾತ್ಮದ ನಂಟಿದೆ. ಹಾಗಿದ್ದ ಮೇಲೆ ಈ ಕುಂಭ ಮೇಳವೆಂಬ ಪರಿಕಲ್ಪನೆಗೆ ಘನವಾದೊಂದು ಇತಿಹಾಸ ಇರದಿರಲು ಸಾಧ್ಯವೇ? ಈ ಬಗ್ಗೆ ಕೆದಕುತ್ತಾ ಹೋದರೆ, ಅದರ ಮೂಲವೆಂಬುದು ಸಮುದ್ರ ಮಂಥನದತ್ತ ಕರೆದೊಯ್ಯುತ್ತೆ. ಅಮೃತ ಸೇವನೆಗೋಸ್ಕರ ದೇವಾನುದೇವತೆಗಳು ಮತ್ತು ರಾಕ್ಷಸ ಸಮೂಹದ ನಡುವೆ ನಡೆದ ಭೀಕರ ಯುದ್ಧವನ್ನು ಸಮುದ್ರ ಮಂಥನ ಅಂತ ಕರೆಯಲಾಗುತ್ತೆ. ಅಮೃತ ಸೇವನೆಗಾಗಿ ಮಂದರಾಚಲ ಪರ್ವತವನ್ನು ಕಡೆಗೋಲಾಗಿಯೂ, ವಾಸುಕಿಯನ್ನು ಹಗ್ಗವಾಗಿಯೂ ಬಳಸಿಕೊಳ್ಳಲಾಗಿತ್ತು. ಈ ಜಿದ್ದಾಜಿದ್ದಿ ಸೆಣಸಾಟದಂಥಾ ಕಡೆಯುವಿಕೆಯಲ್ಲಿ ಕಡೆಗೂ ಅಮೃತ ತುಂಬಿದ ಕಳಶ ಸಾಗರದಿಂದ ಹೊರ ಬರುತ್ತೆ. ಆ ಸಮಯದಲ್ಲಿ ನಾಲಕ್ಕು ಅಮೃತದ ಹನಿಗಳು ನಾಲಕ್ಕು ಜಾಗಗಳಿಗೆ ಚಿಮ್ಮಿ ಬಿದ್ದಿದ್ದವು. ಆ ಮೂರು ಸ್ಥಳಗಳು ಈವತ್ತಿನ ಪ್ರಯಾಗ್ ರಾಜ್, ಹರಿದ್ವಾರ, ಉಜ್ಜೈನ್, ನಾಸಿಕ್ ಅಂತ ಹೇಳಲಾಗುತ್ತೆ. ಈ ಸ್ಥಳಗಳಲ್ಲಿಯೇ ಕುಂಭ ಮೇಳ ಜರುಗುತ್ತಾ ಬಂದಿದೆ.
ಅದು ನಿಗೂಢ ಲೋಕ

ಮನುಷ್ಯ ಸಂಘಜೀವಿ. ಅದೇನೇ ತಕರಾರುಗಳಿದ್ದರೂ ಕೂಡಾ ಸದಾ ಒಂದಷ್ಟು ಮಂದಿಯೊಂದಿಗೆ ಸಂಪರ್ಕದಲ್ಲಿದ್ದುಕೊಂಡು, ಜನರ ನಡುವೆಯೇ ಬದುಕಲು ಬಯಸೋದು ಮನುಷ್ಯರ ಸಹಜ ನಡವಳಿಕೆ. ಇದೆಲ್ಲದರ ನಡುವೆ ನಾನಾ ಆಘಾತಗಳಿಂದ ಮನುಷ್ಯರಿಂದ ತುಸು ಅಂತರ ಕಾಯ್ದುಕೊಂಡು, ದ್ವೀಪದಂತಿರುವವರೆಲ್ಲ ಜನಸಾಮಾನ್ಯರ ಪಾಲಿಗೆ ನಿಗೂಢವಾಗಿಯೇ ಕಾಣಿಸುತ್ತಾರೆ. ಆ ದ್ವೀಪದತ್ತ ಸಹಜವಾಗಿಯೇ ಆಸುಪಾಸಿನ ಮಂದಿಯ ದೃಷ್ಟಿ ನೆಟ್ಟುಕೊಳ್ಳೋದಿದೆ. ಹಾಗಿರುವಾಗ ಕುಂಭ ಮೇಳವನ್ನು ಹೊರತಾಗಿಸಿ ಬೇರೆಲ್ಲೂ ಕಾಣಸಿಗದ ನಾಗಾಸಾಧುಗಳ ಬಗ್ಗೆ ಕೌತುಕ ಮೂಡಿಕೊಳ್ಳದಿರಲು ಸಾಧ್ಯವೇ?
ಈವತ್ತಿಗೆ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಅಘೋರಿಗಳ ಜಾತ್ರೆಯೇ ನೆರೆದಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿರುವ ನಾಗಾ ಸಾಧುಗಳು ಬೇರೆ ಅವಧಿಯಲ್ಲಿ ಎಲ್ಲಿರುತ್ತಾರೆ? ಅವರ ಜೀವನ ಕ್ರಮ ಹೇಗಿರುತ್ತದೆ? ಯಾವ ಉದ್ದೇಶವಿಟ್ಟುಕೊಂಡು ಅವರೆಲ್ಲ ಇಂಥಾದ್ದೊಂದು ಅತಿಭಯಂಕರ ಹಾದಿಯಲ್ಲಿ ಆಧ್ಯಾತ್ಮಿಕ ಸಾಧನೆಗಳಿಗುತ್ತಾರೆ? ನರಮನುಷ್ಯರಾದ ನಾವೆಲ್ಲ ಸಾಮಾನ್ಯವಾದೊಂದು ಕೆಲಸ ಮಾಡೋ ಸಂಕಲ್ಪ ಮಾಡಿ, ಅದರಿಂದ ಅರ್ಧದಲ್ಲಿಯೇ ನುಣುಚಿಕೊಳ್ಳೋದಿದೆ. ಒಂದು ಕೆಲಸ ಹಿಡಿದರೆ ಅಸು ಬಹುಬೇಗನೆ ಬೋರು ಹೊಡೆಸುತ್ತೆ. ಅಂಥಾದ್ದರಲ್ಲಿ ಒಂದ್ಯಾವುದೋ ಉದ್ದೇಶಕ್ಕೆ ಬದುಕನ್ನೇ ಮುಡಿಪಾಗಿಡುವ, ಎಲ್ಲ ಐಹಿಕ ಸಂಕೋಲೆಗಳನ್ನು ಧಿಕ್ಕರಿಸಿ ಬದುಕೋ ಶಕ್ತಿ ಈ ನಾಗಾ ಸಾಧುಗಳಿಗೆ ಸಿದ್ಧಿಸೋದು ಹೇಗೆ? ನಾಗಾ ಸಾಧುಗಳ ಬಗ್ಗೆ ಇಂಥಾ ಹತ್ತಾರು ಪ್ರಶ್ನೆಗಳಿವೆ. ಜನಸಾಮಾನ್ಯರಲ್ಲಿಯೂ ಕುತೂಹಲಗಳಿದ್ದಾವೆ!
ಸನ್ಯಾಸ ದೀಕ್ಷೆಯಂಥಾ ನಡಾವಳಿಗಳೇ ಜನಸಾಮಾನ್ಯರ ಪಾಲಿಗೆ ಅಚ್ಚರಿಯಾಗಿ ಕಾಣಿಸುತ್ತೆ. ಇದ್ದಬದ್ದ ಬಂಧಗಳನ್ನೆಲ್ಲ ಕಳಚಿಕೊಂಡು ಏಕಾಂಗಿಯಾಗಿ ಧ್ಯಾನಸ್ಥರಾಗೋ ಸನ್ಯಾಸ ಪರೆಂಪರೆಯೇ ಅಚ್ಚರಿ ಮೂಡಿಸುತ್ತೆ. ಗಮನೀಯ ಅಂಶವೆಂದರೆ, ನಮ್ಮ ಸುತ್ತಲಿರೋ ಸನ್ಯಾಸ ಪರಂಪರೆ ಅತ್ಯಂತ ಸಾತ್ವಿಕ ಚೌಕಟ್ಟಿನಲ್ಲಿದೆ. ಆದರೆ ಅಘೋರಿಗಳ ಲೋಕ ಮತ್ರಾ ಅದೆಲ್ಲದಕ್ಕೂ ತದ್ವಿರುದ್ಧ. ಅದರೊಳಗಿನ ಪ್ರತೀ ಕದಲಿಕೆಗಳೂ ನಿಗೂಢ. ಈ ಅಘೋರಿಗಳ ಆಧ್ಯಾತ್ಮಿಕ ಸಿದ್ಧಿಯ ಹಾದಿಯಿದೆಯಲ್ಲಾ? ಅದು ನಿಜಕ್ಕೂ ರಣ ರೋಚಕ. ಅದರೊಳಗೆ ಅಡ್ಡಾಡೋದಿರಲಿ, ತುಸು ಇಣುಕಿ ನೋಡಲೂ ಕೂಡಾ ಸಾವಿರ ಗುಂಡಿಗೆ ಬೇಕಾಗುತ್ತದೆ. ಸಾಮಾನ್ಯ ಜನರು ಅದರ ಸಣ್ಣ ಸಣ್ಣ ಕಥನಗಳನ್ನು ಕೇಳಿದರೂ ಕೂಡಾ ಬೆಚ್ಚಿ ಬೀಳೋದು ಗ್ಯಾರೆಂಟಿ.
ಅಘೋರಿ ಅಂದ್ರೆ ಏನು?

ಈ ಅಘೋರಿ ಎಂಬುದರ ಪದಮೂಲ ಸಂಸ್ಕೃತದಲ್ಲಿದೆ. ಅಂಧಕಾಲ ಮೀರಿದ, ಭಯವಿಲ್ಲದ ಎಂಬಂಥಾ ಅರ್ಥ ಅದಕ್ಕಿದೆ. ಬಹುಶಃ ಭಯ ಮತ್ತು ಮಾನಸಿಕ ಚಂಚಲತೆಯನ್ನು ಮೀರಿಕೊಳ್ಳದ ಯಾರೊಬ್ಬರೂ ಕೂಡಾ ಅಘೋರಿಯಾಗುವ ಬಗ್ಗೆ ಆಲೋಚಿಸಲೂ ಸಾಧ್ಯವಿಲ್ಲ. ಇದೀಗ ಅಘೋರಿಗಳ ಬಗ್ಗೆ ಚರ್ಚೆಗಳಾಗುತ್ತಿವೆ. ಅನೇಕರು ಅಘೋರಿಯಾಗೋದರ ಬಗ್ಗೆ ತಮಗೆ ತೋಚಿದಂತೆ, ಹಗುರವಾದ ವಿಶ್ಲೇಷಣೆಯನ್ನೂ ಮಾಡುತ್ತಿದ್ದಾರೆ. ಆದರೆ, ಅಘೋರಿಯಾಗುವ ಹಾದಿ ಸಲೀಸಾದುದಲ್ಲ. ಅಲ್ಲಿ ಹೆಜ್ಜೆ ಹೆಜ್ಜೆಗೂ ಕಠೋರ ಹಾದಿಯನ್ನು ಕ್ರಮಿಸಬೇಕಾಗುತ್ತದೆ. ಹಾಗಂತ ಈ ನಾಗಾ ಸಾಧುಗಳೆಲ್ಲ ಒಂದೇ ಪಂಥಕ್ಕೆ ಸೇರಿದವರು ಅಂದುಕೊಳ್ಳುವಂತಿಲ್ಲ. ನಾಗಾ ಸಾಧುವಾಗಿ ರೂಪಾಂತರ ಹೊಂದಿ, ಅಘೋರಿಯಾಗುವ ಹಾದಿಯೊಂದು ಸುದೀರ್ಘ ಪಯಣ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ.
ಕಂಕಾಲರು, ಕಾಪಾಲಿಕರು, ಹಠಯೋಗಿ, ಚಾಂಡಾಲರು ಹೀಗೆ ಅಘೋರಿಗಳಲ್ಲಿಯೇ ನಾನಾ ಪಂಥಗಳಿದ್ದಾವೆ. ಈಗಾಗಲೇ ಭಾರತದ ಅನೇಕರು ನಾಗಾ ಸಾಧುಗಳ ಲೋಕದೊಳಗೆ ತೆರಳಿ ಒಂದಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಆದರೆ, ಈ ಸಿಕ್ಕಿರೋದೇ ಅಚಿತಿಮವಲ್ಲ. ಯಾಕೆಂದರೆ, ನಾಗಾ ಸಾಧುಗಳು ಯಾವ ಕಾರಣಕ್ಕೂ ಕೂಡಾ ತಮ್ಮ ರಹಸ್ಯಗಳನ್ನು ಖುಲ್ಲಂಖುಲ್ಲಾ ಹೊರಜಗತ್ತಿಗೆ ಬಿಟ್ಟು ಕೊಡುವವರಲ್ಲ. ಒಂದು ವೇಳೆ ನಾಗಾ ಸಾಧುಗಳ ಜೀವನ ಕ್ರಮ, ತಂತ್ರ ವಿದ್ಯೆಗಳ ಒಂದಷ್ಟು ವಿಚಾರಗಳನ್ನಾದರೂ ತಿಳಿದುಕೊಳ್ಳಬೇಕೆಂದರೆ, ಅದೇ ಹಾದಿಯಲ್ಲಿ ನಡೆದು ನಾಗಾಸಾಧುಗಳಾಗಿ ಧೀಕ್ಷೆ ಪಡೆಯಬೇಕಾಗುತ್ತದೆ. ಒಂದು ವೇಳೆ ಆ ಸಾಹಸ ಮಾಡಿದರೂ ಸಹ ಎಲ್ಲ ವಿಚಾರಗಳೂ ದಕ್ಕಲು ಸಾಧ್ಯವಿಲ್ಲ. ಹೀಗೆ ನಾಗಾ ಸಾಧುವಾಗಿ ದೀಕ್ಷೆ ಪಡೆದುಕೊಂಡರೂ ಒಂದು ಪಂಥಕ್ಕೆ ಸೇರಿಕೊಳ್ಳಬೇಕಾಗುತ್ತೆ. ಆ ಪಂಥದ ಆಚಾರ ವಿಚಾರಗಳು ತಿಳಿಯಬಹುದಾದರೂ, ಬೇರೆ ಪಂಥಗಳು ನಿಗೂಢವಾಗಿಯೇ ಉಳಿದು ಬಿಡುತ್ತವೆ.
ಅಘೋರಿಗಳ ನಿಗೂಢ ಲೋಕ













