-ಐಟಿ ಸಿಟಿ ನಾಗರಿಕರಿಗೆ ಮತ್ತೆ ಟೋಯಿಂಗ್ ಕಂಟಕ!
-ಮತ್ತೆ ಕೇಕೆ ಹಾಕಲಿದೆಯಾ ಟೋಯಿಂಗ್ ಭೂತ?
ಬೆಂಗಳೂರಿನಂಥಾ ಮಹಾ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಪ್ರತೀ ಕ್ಷಣವೂ ಜನರನ್ನು ಹಿಂಡಿ ಹಿಪ್ಪೆ ಮಾಡಿ ಹಾಕುತ್ತಿದೆ. ಅದ್ಯಾವ ಸರ್ಕಾರಗಳೇ ಬಂದರೂ ಕೂಡಾ ಜನರನ್ನು ಸಂಪೂರ್ಣವಾಗಿ ಈ ಸಮಸ್ಯೆಯಿಂದ ಪಾರು ಮಾಡಲು ಸಾಧ್ಯವಾಗುತ್ತಲೇ ಇಲ್ಲ. ಅಷ್ಟಕ್ಕೂ ದಿನೇ ದಿನೆ ಬೆಳೆಯುತ್ತಿರುವ, ಎದೆ ಮೇಲೆ ಲಕ್ಷಾಂತರ ಜನರನ್ನು ಹೊತ್ತು ಸಲಹುತ್ತಿರುವ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಸಂಪೂರ್ಣವಾಗಿ ತೊಡೆದು ಹಾಕೋದು ಸಲೀಸಿನ ಸಂಗತಿಯೇನಲ್ಲ. ಹಾಗಂತ ಅದು ಅಸಾಧ್ಯವಾದದ್ದು ಅಂದುಕೊಳ್ಳುವಂತೆಯತೂ ಇಲ್ಲ. ಯಾಕಂದ್ರೆ, ಬೆಂಗಳೂರಿನಲ್ಲಿ ದಶಕದಿಂದೀಚೆಗೆ ಲೆಕ್ಕವಿಲ್ಲದಷ್ಟು ಫೈ ಓವರುಗಳಾಗಿವೆ. ಯಥೇಚ್ಚವಾಗಿಯೇ ಅಂಡರ್ ಪಾಸ್ ಗಳು ನಿರ್ಮಾಣ ಗೊಂಡಿವೆ. ಆದರೂ ಕೂಡಾ ರಸ್ತೆ ಮೇಲಿನ ದಟ್ಟಣೆ ಮಾತ್ರ ಕಡಿಮೆಯಾದಂತಿಲ್ಲ.

ಹೀಗೆ ಒಂದು ಕಡೆಯಿಂದ ಟ್ರಾಫಿಕ್ ಸಮಸ್ಯೆ ಕಾಡುತ್ತಿದ್ದರೆ, ಮತ್ತೊಂದು ದಿಕ್ಕಿನಲ್ಲಿನ ವಾಹನ ದಟ್ಟಣೆಯ ಕೂಸಿನಂಥಾ ಪಾರ್ಕಿಂಗ್ ಸಮಸ್ಯೆ ಬೆಂಗಳೂರು ಮಂದಿಯನ್ನು ಬಿಟ್ಟೂ ಬಿಡದಂತೆ ಅವ್ಯಾಹತವಾಗಿ ಕಾಡಲಾರಂಭಿಸಿದೆ. ಆಯಾ ಏರಿಯಾಗಳಲ್ಲಿ ಜನಸಂಖ್ಯೆಗನುಗುಣವಾಗಿ ವ್ಯವಸ್ಥಿತವಾದ ಪಾಠರ್ಕಿಂಗ್ ಸೌಲಭ್ಯ ಕಲ್ಪಿಸಬೇಕನ್ನೋದು ಹಲವಾರು ವರ್ಷಗಳಿಂದಲೂ ಬೆಂಗಳೂರಿನ ನೊಂದ ನಾಗರಿಕರ ಅಹವಾಲಾಗಿತ್ತು. ಆದರೆ, ವರ್ಷಾಂತರಗಳಿಂದಲೂ ಕೂಡಾ ಟ್ರಾಫಿಕ್ ಪೊಲೀಸರ ಟೋಯಿಂಗ್ ಭೂತ ನಾಗರಿಕರನ್ನೆಲ್ಲ ಪರಿ ಪರಿಯಾಗಿ ಬೆದರಿಸುತ್ತಾ ಬಂದಿತ್ತು. ಯಾವುದು ಪಾರ್ಕಿಂಗೋ, ಮತ್ಯಾವುದು ನೋ ಪಾರ್ಕಿಂಗೋ… ಪ್ರಯಾಸ ಪಟ್ಟು ಸಿಕ್ಕಲ್ಲಿ ಕಾರನ್ನೋ, ಬೈಕನ್ನೋ ನಿಲ್ಲಿಸಿ ಹೋದರೆ ವಾಪಾಸಾಗೋವಷ್ಟರಲ್ಲಿ ಟೋಯಿಂಗ್ ವಾಹನಗಳು ಎಳೆದು ಹೊತ್ತೊಯ್ದು ಹೋಗುತ್ತಿದ್ದ್ದರಿಂದಾಗಿ ಮಂದಿ ಕಂಗಾಲಾಗಿದ್ದರು.
ಮತ್ತೆ ಟೋಯಿಂಗ್ ಭೂತ

ಮೇಲು ನೋಟಕ್ಕೆ ಇಂತಾ ಟೋಯಿಂಗ್ ಪ್ರಕ್ರಿಯೆ ಬೆಂಗಳೂರಿನಂಥಾ ಮಹಾ ನಗರಗಳ ಪಾಲಿಗೆ ಅನಿವಾರ್ಯವೆಂಬಂತೆ ಕಾಣಿಸೋದರಲ್ಲಿ ಅಚ್ಚರಿಯೇನಿಲ್ಲ. ಆದರೆ ಟ್ರಾಫಿಕ್ ಪೊಲೀಸ್ ವಿಭಾಗ ಈ ಹಿಂದೆ ಟೋಯಿಂಗ್ ಟೆಂಡರ್ ಅನ್ನು ಖಾಸಗಿಯವರಿಗೆ ವಹಿಸಿಕೊಂಡು ಬಂಸಿತ್ತು. ಹೀಗೆ ಟೆಂಡರ್ ಪಡೆದುಕೊಂಡವರ ಹಾವಳಿ ಅನ್ನೋದು ಬೆಂಗಳೂರಿನ ನಾಗರಿಕರನ್ನು ಅಕ್ಷರಶಃ ಕಂಗಾಲಾಗಿಸಿತ್ತು. ಯಾವುದೋ ಎಮರ್ಜೆನ್ಸಿ ಸನ್ನಿವೇಶವಿರುತ್ತೆ. ಯಾರಿಗಾದರೂ ಆಸ್ಪತ್ರೆಗೆ ದಾಖಲಾದವರಿಗೆ ಕೂಡಲೇ ರಕ್ತವೋ, ಮಾತ್ರೆಗಳನ್ನೋ ತೆಗೆದುಕೊಂಡು ಹೋಗಬೇಕಾಗಿರುತ್ತೆ ಅಂತಿಟ್ಟುಕೊಳ್ಳಿ. ರಸ್ತೆ ಬದಿ ಧಾವಂತದಲ್ಲಿ ವಾಹನ ನಿಲ್ಲಿಸಿ ವಾಪಾಸುಯಯ ಬಂದು ನೋಡಿದರೆ ವಾಹನಗಳು ಇಲ್ಲ ಅನ್ನಿಸಿದಾಗ ಯಾರಿಗೇ ಆದರೂ ಎದೆ ಧಸಕ್ ಅನ್ನಿಸದೇ ಇರೋದಿಲ್ಲ.
ಹೀಗೆ ಕಂಡಲ್ಲಿಂದ ವಾಹಬನಗಳನ್ನು ಟೋಯಿಂಗ್ ಮಾಡಿ ಕೊಂಡೊಯ್ಯುವ ಮಂದಿ ಅದನ್ನು ಸೀದಾ ಆಯಾ ಭಾಗದ ಟ್ರಾಫಿಕ್ ಪೊಲೀಸ್ ಠಾಣೆಯ ಆಸು ಪಾಸಲ್ಲಿ ನಿಲ್ಲಿಸಿರುತ್ತಾರೆ. ಅದಕ್ಕಾಗಿ ಕಿಲೋಮೀಟರುಗಟ್ಟಲೆ ಹೋಗಿ, ದಂಡ ಕಟ್ಟಿ ಗೋಗರೆದು ವಾಪಾಸು ತರೋವಷ್ಟರಲ್ಲಿ ಅನೇಕರ ಜೀವ ಹೋಗಿದ್ದೂ ಇದೆ. ಇದರ ಪರಿಣಾಮ ಅಷ್ಟೊಂದು ಭೀಕರವಾಗಿರೋದರಿಂದಲೇ ಟೋಯಿಂಗ್ ರದ್ದು ಮಾಡಬೇಕೆಂದು ಬೆಂಗಳೂರಿನ ಮಂದಿ ಆಗ್ರಹಿಸುತ್ತಾ ಬಂದಿದ್ದರು. ಕಡೆಗೂ ನಎರಡು ವರ್ಷಗಳ ಹಿಂದೆ ಟೋಯಿಂಗ್ ರದ್ದಾಗಿತ್ತು. ಇದೀಗ ಮತ್ತೆ ಸಂಚಾರ ದಟ್ಟಣೆ ಆರಂಭವಾಗಿರೋದರಿಂದಾಗಿ ಟೋಯಿಂಗ್ ಅನ್ನು ಮತ್ತೆ ಶುರು ಮಾಡಲುನ ಸರ್ಕಾರ ಚಿಂತಿಸುತ್ತಿದೆ. ಖುದ್ದು ಗೃಹ ಸಚಿವರಾದ ಜಿ ಪರಮೇಶ್ವರ್ ಇಂಥಾದ್ದೊಂದು ಸೂಚನೆ ನೀಡಿದ್ದಾರೆ.
ಅದೊಂದು ಮಾಫಿಯಾ

ಕಳೆದ ಕೆಲ ದಿನಗಳಿಂದ ಬೆಂಗಳೂರು ಸೀಮೆಯಲ್ಲಿ ಟೋಯಿಂಗ್ ಮಾಫಿಯಾದ ಸುತ್ತ ಮಾತುಗಳು ಸುಳಿದಾಡುತ್ತಿವೆ. ಬೆಂಗಳೂರಿನ ಟ್ರಾಫಿಕ್ಕು, ಆ ಜಂಜಾಟಗಳ ಅರಿವಿರುವವರಿಗೆ ಸಿಕ್ಕ ಸಿಕ್ಕಲ್ಲಿ ವಾಹನಗಳನ್ನು ಎತ್ತಾಕಿಕೊಂಡು ಗಾಯಬ್ ಆಗುವ ಟೋಯಿಂಗ್ ತಲೆನೋವು ಚಿರಪರಿಚಿತ. ಈ ಬಗ್ಗೆ ಪ್ರತೀ ಬೆಂಗಳೂರಿಗರೊಳಗೂ ಅಸಹನೆಯಿದೆ. ಆಕ್ರೋಶವೂ ಇದೆ. ಆದರೆ ಒಂದಿಡೀ ಟ್ರಾಫಿಕ್ ಪೊಲೀಸ್ ವ್ಯವಸ್ಥೆ ಮೇಲೆಯೇ ನಾಗರಿಕರಲ್ಲಿಮ ಅಸಮಾಧಾನವಿತ್ತು. ಆದರೆ ಜನರ ಆಶೋತ್ತರಗಳಿಗೆ ಕಿಲುಬುಗಾಸಿನ ಕಿಮ್ಮತ್ತೂ ಇಲ್ಲವಾಗಿದೆ. ಈ ಕಾರಣದಿಂದಲೇ ಟ್ರಾಫಿಕ್ ಅನ್ನು ಹತೋಟಿಯಲ್ಲಿಡಲು ಬೇರೆ ಮಾರ್ಗ ಹುಡುಕುವ ಬದಲಾಗಿ ಅತ್ಯಂತ ಡೇಂಜರಸ್ ಆದ ಟೋಯಿಂಗ್ ಅನ್ನು ಮತ್ತೆ ತರಲು ಸರ್ಕಾರ ಚಿಂತಿಸುತ್ತಿರೋದು ಸರಿಯಲ್ಲ ಅಂತ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನೋ ಪಾರ್ಕಿಂಗ್ ಅಂತಿರುವ ಪ್ರದೇಶಗಳಲ್ಲಿ ವಾಹನ ನಿಲ್ಲಿಸೋದು ಅಪರಾಧ. ಹಾಗೆ ನಿಲ್ಲಿಸಿದ ವಾಹನಗಳನ್ನು ಟೋಯಿಂಗ್ ಸಿಬ್ಬಂದಿ ತೆಗೆದುಕೊಂಡು ಹೋಗಿ ಆಯಾ ಪೊಲೀಸ್ ಠಾಣೆಗಳ ಮುಂದೆ ನಿಲ್ಲಿಸುತ್ತಾರೆ. ಜನ ಮಾಡಿದ ತಪ್ಪಿಗೆ ಜುಲ್ಮಾನೆ ತೆತ್ತು ವಾಹನ ಪಡೆದುಕೊಳ್ಳುತ್ತಾರೆ. ಇದು ಕಾನೂನು ಸಮ್ಮತವಾದ ಮಾದರಿ. ಆದರೆ ಅಂಥಾ ನೀತಿ ನಿಯಮಾವಳಿಗಳೆಲ್ಲವೂ ಟೋಯಿಂಗ್ ಮಾಫಿಯಾ ಮುಂದೆ ಮಂಡಿಯೂರುತ್ತೆ. ಟೋಯಿಂಗ್ ವಾಹನಗಳ ಟೆಂಡರಿನಿಂದ ಆರಂಭವಾಗಿ, ಹಾದಿ ಬೀದಿಯಲ್ಲಿ ಜನಸಾಮಾನ್ಯರನ್ನು ಸುಲಿಗೆ ಮಾಡುವವರೆಗೂ ಈ ಮಾಫಿಯಾ ಮೇರೆ ಮೀರಿಕೊಂಡಿದೆ. ಇದರ ಹಿಂದೆ ಇಲಾಖೆಯೊಳಗೇ ಹಾಸು ಹೊಕ್ಕಾಗಿರುವಂಥಾ ಕಿಸುರುಗಳಿವೆ. ಕಳೆದೆರಡು ವರ್ಷಗಳಿಂದ ತಣ್ಣಗಾಗಿದ್ದ ಈ ದಂಧೆ ಇದೀಗ ಮತ್ತೆ ಶುರುವಾಗುವ ಭಯ ಚಾಲೂ ಆಗಿದೆ.
ವಾಹನವೇ ಮಾಯ









