-ಓದಿದರೆ ಬೆರಗಾಗೋದು ಗ್ಯಾರಂಟಿ!
-ಜಗತ್ತಿನಲ್ಲಿ ಇಂಥಾದ್ದೆಲ್ಲ ನಡೆಯುತ್ತಾ?
ಸಣ್ಣದೊಂದು ಕುತೂಹಲವನ್ನು ನಮ್ಮೊಳಗೆ ಸದಾ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳದೇ ಹೋದರೆ ಬದುಕು ಒಂದೊಂದು ಘಟ್ಟದಲ್ಲಿ ತೀರಾ ಬೋರು ಹೊಡೆಸಿ ಬಿಡುತ್ತೆ. ಹೊಸತನ್ನು ಧ್ಯಾನಿಸುವ ಮನಸೊಂದಿದ್ದರೂ ಸಾಕು; ನಮ್ಮೊಳಗೊಂದು ಉತ್ಸಾಹ ಸದಾ ಜೀವಂತವಾಗಿರುತ್ತೆ. ನಿಮ್ಮೊಳಗೂ ಅಂಥಾದ್ಗದೊಂದು ಬೆರಗಿನ ಭಾವ ಇದೆಯೆಂದಾದರೆ, ಕೆಳಗೆ ಕೊಟ್ಟಿರುವ ಒಂದಷ್ಟು ವಿಚಾರಗಳು ನಿಜಕ್ಕೂ ನಿಮ್ಮನ್ನು ಅಚ್ಚರಿಗೆ ದೂಡುತ್ತವೆ. ನಾನಾ ದಿಕ್ಕಿನಲ್ಲಿ ಆಲೋಚನೆಗೆ ಹಚ್ಚುತ್ತವೆ. ಈ ಜೀವನದಲ್ಲೇನಿದೆ ಎಂಬ ನಿರಾಶಾ ಭಾವವನ್ನೆಲ್ಲ ಒಂದೇ ಸಲಕ್ಕೆ ನಿವಾಳಿಸಿ ಎಸೆಯಬಲ್ಲ ಸಂಗತಿಗಳು ಈ ಜಗತತ್ತಿನಲ್ಲಿದ್ದಾವೆ.
ಅದರಲ್ಲೊಂದಷ್ಟು ನಮ್ಮ ಬದುಕಿನ ಭಾಗವಾಗಿದ್ದರೂ ಕೂಡಾ ನಾವು ಯಾವತ್ತಿಗೂ ಅದರತ್ತ ಅಪ್ಪಿ ತಪ್ಪಿಯೂ ಆಲೋಚಿಸಿರೋದಿಲ್ಲ. ನಿಖರವಾಗಿ ಹೇಳಬೇಕೆಂದರೆ ನಮ್ಮ ಸುತ್ತಮುತ್ತಲಿರುವ ಅನೇಕ ವಿದ್ಯಮಾನಗಳ ಹಿಂದೆ, ಜೀವಿಗಳ ಹಿಂದೆ ಚಕಿತಗೊಳಿಸಬಲ್ಲ ಅದೆಷ್ಟೋ ವಿಚಾರಗಳಿರುತ್ತವೆ. ಆ ಬಗ್ಗೆ ಒಂದಷ್ಟು ಮಂದಿ ಅವಿರತವಾಗಿ ಸಂಶೋಧನೆ, ಅಧ್ಯಯನಗಳನ್ನು ನಡೆಸುತ್ತಿರುಉತ್ತಾರೆ. ಅದರ ಫಲವಾಗಿಯೇ ಒಂದಷ್ಟು ಚೆಂದದ ವಿಚಾರಗಳು ಆಗಾಗ ನಮ್ಮೆಲ್ಲರ ಬೊಗಸೆ ತುಂಬಿಕೊಳ್ಳುತ್ತವೆ.
ಪಾರಿವಾಳದ ಕಕ್ಕದ ಕಿಮ್ಮತ್ತು!

ಪಾರಿವಾಳಗಳು ಎಲ್ಲ ಕಾಲಮಾನದಲ್ಲಿಯೂ ಪರಿಚಿತವಾಗಿದ್ದ, ಈಗಲೂ ಅಸ್ತಿತ್ವ ಉಳಿಸಿಕೊಂಡಿರುವ ಪರಿಚಿತ ಪಕ್ಷಿಗಳು. ಪಾರಿವಾಳ ಈವತ್ತಿಗೂ ಶಾಂತಿಯ ಸಂಕೇತವಾಗಿಯೇ ಬಿಂಬಿಸಿಕೊಂಡಿದೆ. ಕೊಂಚ ಜಾಗ ಸಿಕ್ಕರೆ ಮನುಷ್ಯರಿರೋ ವಾತಾವರಣದಲ್ಲಿಯೇ ಗೂಡು ಕಟ್ಟಿಕೊಂಡು ಬಿಡಾರ ಹೂಡುವ, ಅಲ್ಲಿಯೇ ಸಂತಾನಾಭಿವೃದ್ಧಿಯನ್ನೂ ನಡೆಸಿಬಿಡುವ ಪಾರಿವಾಳಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಮನೆಯ ವಾತಾವರಣದಲ್ಲಿ ಅವಿದ್ದರೆ ಖುಷಿಯೇ. ಆದ್ರೆ ಅವುಗಳ ಹಿಕ್ಕೆಯ ಕಾಟವನ್ನ ಮಾತ್ರ ಸಹಿಸೋಕಾಗೋದಿಲ್ಲ ಅನ್ನೋದು ಪಾರಿವಾಳಗಳ ಮೇಲಿರೋ ಕಾಮನ್ ಕಂಪ್ಲೇಂಟು!
ಆದ್ರೆ ಪಾರಿವಾಳಗಳ ಹಿಕ್ಕೆ, ಅರ್ಥಾತ್ ಕಕ್ಕ ನೀವೆಣಿಸಿರುವಷ್ಟು ನಿಕೃಷ್ಟವಲ್ಲ. ನಿಮ್ಮ ಕಣ್ಣಿಗೆ ಅಸಹ್ಯವಾಗಿ ಕಾಣಿಸೋ ಪಾರಿವಾಳದ ಹಿಕ್ಕೆಗೆ ಒಂದು ಕಾಲದಲ್ಲಿ ಅದೆಂಥಾ ಗೌರವ ಇತ್ತನ್ನೋದು ಗೊತ್ತಾದರೆ ಯಾರಿಗೇ ಆದ್ರೂ ಪಾಪಪ್ರಜ್ಞೆ ಕಾಡದಿರೋದಿಲ್ಲ. ಯಾಕಂದ್ರೆ ಹದಿನೆಂಟನೇ ಶತಮಾನದಲ್ಲಿ ಒಬ್ಬ ರಾಜ ಪಾರಿವಾಳದ ಕಕ್ಕವನ್ನು ಅಪಾರವಾಗಿ ಗೌರವಿಸಿದ್ದ. ಆತನಿಗೆ ಯಾವ ಪರಿ ಗೌರವ ಇತ್ತೆಂದರೆ, ಪಾರಿವಾಳದ ಹಿಕ್ಕೆಯನ್ನು ರಾಜ ಸಂಪತ್ತೆಂದು ಘೋಷಣೆ ಮಾಡಿ ಬಿಟ್ಟಿದ್ದ!
ಒಂದು ಸಂಸ್ಥಾನದ ರಾಜನೇ ಈ ಪರಿಯಾಗಿ ಗೌರವ ಕೊಡಬೇಕೆಂದರೆ ಪಾರಿವಾಳದ ಹಿಕ್ಕೆಗೆ ಎಂಥಾ ಪವರ್ ಇರಬೇಡ. ಹಾಗಾದ್ರೆ ಪಾರಿವಾಳಗಳ ಹಿಕ್ಕೆಯಲ್ಲಿ ಆ ಥರದ ಪವರ್ ಏನಿತ್ತು ಅನ್ನೋ ಪ್ರಶ್ನೆ ಮೂಡಿಕೊಳ್ಳುತ್ತೆ. ಈ ನಿಟ್ಟಿನಲ್ಲಿ ಹೇಳೋದಾದ್ರೆ ಪಾರಿವಾಳದ ಹಿಕ್ಕೆಗಳನ್ನು ಆ ಕಾಲದಲ್ಲಿ ಗನ್ ಪೌಡರ್ ಮಾಡಲು ಬಳಸುತ್ತಿದ್ದರಂತೆ. ಯುದ್ಧ ಕಾಲದಲ್ಲಿ ಅದರ ಅವಶ್ಯಕತೆ ತೀವ್ರವಾಗಿದ್ದರಿಂದ ಪಾರಿವಾಳದ ಹಿಕ್ಕೆಗಳಿಗೆ ಭಾರೀ ಬೇಡಿಕೆ ಬಂದಿತ್ತಂತೆ. ಶತ್ರು ಪಾಳೆಯದ ವಿರುದ್ಧ ಯುದ್ಧ ಸಾರಲು ಬೇಕಾದ ಐಟಮ್ಮಿನ ಕಚ್ಚಾ ವಸ್ತುವಾದ ಪಾರಿವಾಳದ ಹಿಕ್ಕೆಯನ್ನ ಆ ರಾಜ ರಾಜ ಸಂಪತ್ತೆಂದು ಘೋಷಣೆ ಮಾಡಿದ್ದನೆಂಬ ಉಲ್ಲೇಖವಿದೆ!
ಅಪಹರಣವೂ ಲೀಗಲ್!










