ಖ್ಯಾತ ಬಹುಭಾಷಾ ನಿರ್ದೇಶಕ ಮಣಿರತ್ನಂ ಹಾಗೂ ಬಹುಮುಖ ಪ್ರತಿಭಾವಂತ ನಟ ಕಮಲ್ಹಾಸನ್ ಮತ್ತೆ ಒಂದಾಗಿದ್ದಾರೆ. 1987ರಲ್ಲಿ ಇಬ್ಬರು ಕೂಡಿ `ನಾಯಗನ್’ ಚಿತ್ರ ಮಾಡಿದ್ದರು. ಈಗ ಭರ್ತಿ 36 ವರ್ಷಗಳು ಕಳೆದ್ಮೇಲೆ ಈ ಜೋಡಿ ಮತ್ತೆ ಕೈ ಜೋಡಿಸಿದ್ದು, ದಕ್ಷಿಣ ಭಾರತೀಯ ಸಿನಿಮಾರಂಗ ಮಾತ್ರವಲ್ಲ ಇಡೀ ವಿಶ್ವಸಿನಿದುನಿಯಾವೇ ಕಣ್ಣರಳಿಸುವಂತೆ ಮಾಡಿದೆ. ಇವರಿಬ್ಬರ ಜುಗಲ್ಬಂಧಿಯಲ್ಲಿ ಮೂಡಿಬರಲಿರುವ ಸಿನಿಮಾದ ಬಗ್ಗೆ ಸಪ್ತಸಾಗರದಾಚೆಯೂ ನಿರೀಕ್ಷೆ ಹಬ್ಬಿಕೊಂಡಿದ್ದು, ತಾರಾಗಣದ ಕುರಿತಾಗಿ ಅದೊಂದು ಸುದ್ದಿ ಹೊರಬಿದ್ದಿದೆ. ಕಾಲಿವುಡ್ ಸೂಪರ್ ಸ್ಟಾರ್ಗಳ ಜೊತೆ ಪ್ಯಾನ್ ಇಂಡಿಯಾ ಸ್ಟಾರ್ ಗಳು ಸಮಾಗಮಗೊಳ್ಳುವ ಕಥನ ತಮಿಳು ಅಂಗಳದಿಂದ ದಿಬ್ಬಣ ಹೊರಟು ಸೋಷಿಯಲ್ ಸಮುದ್ರ ಸೇರಿದೆ.
ಅಷ್ಟಕ್ಕೂ, ಆ ಸ್ಟಾರ್ ಗಳು ಯಾರು? ಈ ಕುತೂಹಲಕ್ಕೆ ಉತ್ತರ ಕೊಡಬೇಕು ಅಂದರೆ ಪಾಪ್ಯೂಲರ್ ಪ್ಯಾನ್ ಇಂಡಿಯಾ ಸ್ಟಾರ್ ದುಲ್ಕರ್ ಸಲ್ಮಾನ್ ಹಾಗೂ ಕಾಲಿವುಡ್ ಆ್ಯಕ್ಟರ್ ಜಯಂ ರವಿಯವರ ಹೆಸರನ್ನ ಹೇಳಲೇಬೇಕು. ಹೌದು, ಈ ಇಬ್ಬರು ಸೂಪರ್ ಸ್ಟಾರ್ ಗಳು ಕಮಲ್ ಹಾಸನ್ ಜೊತೆಗೆ ಸ್ಕ್ರೀನ್ ಶೇರ್ ಮಾಡಲಿದ್ದು ಮೇಜರ್ ರೋಲ್ನ ಪ್ಲೇ ಮಾಡುತ್ತಿದ್ದಾರೆನ್ನುವ ಸುದ್ದಿ ಹೊರಬಿದ್ದಿದೆ. ಈಗಾಗಲೇ ಈ ಜೋಡಿ ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಹಾಗೂ ಓಕೆ ಕಣ್ಮಣಿ ಚಿತ್ರದಲ್ಲಿ ಮಿಂಚಿದ್ದರು. ಇದೀಗ ಮತ್ತೊಮ್ಮೆ ಸ್ಟಾರ್ ಮೇಕರ್ ಮಣಿರತ್ನಂ ಡೈರೆಕ್ಷನ್ ಪಿಕ್ಚರ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಉಳಗ ನಾಯಗನ್ ಜೊತೆ ತೆರೆಹಂಚಿಕೊಳ್ಳಲು ಒಪ್ಪಿಕೊಂಡಿದ್ದಾರೆನ್ನುವ ಸಮಾಚಾರ ಬ್ರೇಕಿಂಗ್ ನ್ಯೂಸ್ ಆಗಿದೆ. ಜೊತೆಗೆ ಸೌತ್ ಸಿನಿಮಾಗಳ ಲೀಡಿಂಗ್ ಲೇಡಿ ತ್ರಿಷಾ ಕೂಡ ಈ ಚಿತ್ರದಲ್ಲಿ ಮಿಂಚ್ತಾರೆನ್ನುವ ಸುದ್ದಿಯಿದೆ. ಆದರೆ, ಈ ಬಗ್ಗೆ ಸಿನಿಮಾದ ಸಾರಥಿ ಕಡೆಯಿಂದಾಗ್ಲೀ, ಅಧಿಪತಿ ಕಡೆಯಿಂದಾಗ್ಲೀ ಅಪ್ಡೇಟ್ ಲಭ್ಯವಾಗಿಲ್ಲ
ಕಳೆದ ವರ್ಷ ಅಧಿಕೃತವಾಗಿ ಈ ಚಿತ್ರ ಘೋಷಣೆಯಾಗಿತ್ತು. ಇವರಿಬ್ಬರ ಕಾಂಬಿನೇಷನ್ನಲ್ಲಿ ಬರಲಿರೋ ಸಿನಿಮಾಗೆ `ಕೆಎಚ್234′ ಹೆಸರು ಸೂಚಿಸಲಾಗಿತ್ತು. ಇಬ್ಬರು ಕೂಡ ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ತೊಡಗಿಸಿಕೊಂಡಿದ್ದರು. ಫೈನಲೀ, ಒಟ್ಟಾಗಿ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ವಿಕ್ರಮ್ ಸಿನಿಮಾದ ಮೂಲಕ ಹಳೆಯ ಫಾರ್ಮ್ಗೆ ಮರಳಿ ಬೆಳ್ಳಿತೆರೆ ರೂಲ್ ಮಾಡಿದ ಉತ್ತಮ್ ವಿಲನ್ ನ, ಮಗದೊಂದು ರೂಪವನ್ನ ವಿಶ್ವಕ್ಕೆ ದರ್ಶನ ಮಾಡಿಸಲು ಮಣಿರತ್ನಂ ಪ್ಲ್ಯಾನ್ ರೂಪಿಸಿದ್ದಾರೆ. ಕಮಲ್ಹಾಸನ್ 234 ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ಡೈರೆಕ್ಷನ್ ಮಾಡಲು ಹೊರಟು ನಿಂತಿದ್ದಾರೆ. ಥ್ರಿಲ್ಲರ್ ಜಾನರ್ನಲ್ಲಿ ಸಿನಿಮಾ ಮೂಡಿಬರಲಿದ್ದು, ಎ ಆರ್ ರೆಹಮಾನ್ ಸಂಗೀತ ಚಿತ್ರಕ್ಕಿರಲಿದೆ. ಕಮಲ್ ಹಾಸನ್, ಮಣಿರತ್ನಂ, ಜಿ ಮಹೇಂದ್ರನ್, ಶಿವ ಅನಂತ್ ಸಹಯೋಗದಲ್ಲಿ ರಾಜ್ಕಮಲ್ ಫಿಲ್ಮ್ ಇಂಟರ್ ನ್ಯಾಷನಲ್ ಅಂಡ್ ಮದ್ರಾಸ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿಬರಲಿದೆ. ಒಂದೆರಡು ವಾರಗಳಲ್ಲಿ ಚಿತ್ರತಂಡದ ಕಡೆಯಿಂದ ಮ್ಯಾಸೀವ್ ಅಪ್ಡೇಟ್ ಹೊರಬೀಳಲಿದೆಯಂತೆ.





